ಶ್ರೀ ಮಡಾಮಕ್ಕಿ ಮೇಳ ನೂತನ ಪ್ರಸಂಗ ರಜತೋತ್ಸವ ಬಿಡುಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 7 , 2015
|
ಜನವರಿ 7, 2015
|
ಶ್ರೀ ಮಡಾಮಕ್ಕಿ ಮೇಳ ನೂತನ ಪ್ರಸಂಗ ರಜತೋತ್ಸವ ಬಿಡುಗಡೆ
ಶಿರೂರು ಮುದ್ದುಮನೆ :
ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರನ್ನು ಸೆಳೆಯಲು ಸಾಮಾಜಿಕ ಪ್ರಸಂಗಗಳ ಅನಿವಾರ್ಯತೆಯಿದ್ದರೂ ಅಂತಹ ಪ್ರಸಂಗಗಳು ಯಕ್ಷಗಾನದ ಚೌಕಟ್ಟನ್ನು ಮೀರದೇ ಛಂದೋಬದ್ದವಾದ ಪದ್ಯಗಳೊಂದಿಗೆ ಬಾಗವತರಿಗೆ ರಾಗ ತಾಳ ಸಂಯ್ಯೋಜಿಸಿ ಹಾಡುವಂತಿರಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕ್ರುತ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಹೇಳಿದರು. ಅವರು ಶಿರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೆಡೆದ ಶ್ರೀ ಮಡಾಮಕ್ಕಿ ಮೇಳದ ರಂಗಸ್ಥಳದಲ್ಲಿ ನೆಡೆದ ಮೇಳದ ನೂತನ ಪ್ರಸಂಗ ಹಂದಿಗದ್ದೆ ಸುರೇಶ ಕುಲಾಲ್ ವಿರಚಿತ ``ರಜತೋತ್ಸವ`` ಎನ್ನುವ ಪ್ರಸಂಗ ಬಿಡುಗಡೆ ಸಮಾರಂಭದಲ್ಲಿ ಶುಬಾಶಂಸನೆ ಮಾಡಿ ಮಾತನಾಡಿದರು.
ಸುರಾಲು ದೇವಸ್ಥಾನದ ತಂತ್ರಿಗಳಾದ ದೇವಿಪ್ರಸಾದ ತಂತ್ರಿಗಳು ಪ್ರಸಂಗ ಬಿಡುಗಡೆ ಮಾಡಿ ಭಾಗವತರಿಗೆ ಹಸ್ತಾಂತರಿಸಿದರು. ಮಣಿಪಾಲ ಕೆ. ಎಂ. ಸಿ. ಪ್ರಾದ್ಯಾಪಕ ಡಾ. ನಾಗಭೂಷಣ ಸೋಮಯಾಜಿಗಳು ಅದ್ಯಕ್ಷತೆ ವಹಿಸಿದ್ದರು. ಮೇಳದ ವ್ಯವಸ್ಥಾಪಕ ಪಿ. ಕಿಶನ್ ಹೆಗ್ಡೆ, ಮ್ಯಾನೆಜರ್ ಮನೋಹರ ಹೆಗ್ಡೆ ಉಪಸ್ಥಿತರಿದ್ದರು. ಪ್ರಸಂಗಕರ್ತ ಸುರೇಶ್ ಕುಲಾಲರನ್ನು ಸನ್ಮಾನಿಸಲಾಯಿತು. ಕೆನರಾ ಇಂಜಿನಿಯರಿಂಗ್ ಕಾಲೇಜು ಪ್ರಾದ್ಯಾಪಕ ರಾಘವೇಂದ್ರ ಶೆಟ್ಟಿ ಕಾರ್ಯಕ್ರಮ ಸಂಯ್ಯೋಜಿಸಿ ವಂದಿಸಿದರು.
|
|
|